Suladhi

ಶ್ರೀಮದಾಚಾರ್ಯರ ಸ್ತೋತ್ರ ಸುಳಾದಿ

ಶ್ರೀ ವಿಜಯದಾಸಾ ವಿರಚಿತ

ರಾಗ : ಭೈರವಿ

ಧೃವತಾಳ

ಶ್ರೀಮದ್ವಿಠಲಪಾದಾಂಬುಜಮಧುಪರಾಜಾ
ಶ್ರೀಮದಚಾರ್ಯ ಧೈರ್ಯ ಯೋಗ ದುರ್ಯಾ
ಕಾಮವರ್ಜಿತ ಕೃಪಾಸಾಗರ ಯತಿರೂಪ
ರೋಮ ರೋಮ ಗುಣಪೂರ್ಣ ಪರಣ
ಸಾಮವಿಖ್ಯಾತ ಸಿದ್ಧ ಸುರರೊಳಗೆ ಪ್ರಸಿದ್ಧ
ಸೀಮರಹಿತ ಮಹಿಮ ಭುವನಪ್ರೇಮ
ತಾಮಸಜನದೂರ ದಂಡಕಮಂಡಲುಧರ
ಶ್ರೀಮಧ್ವಮುನಿರಾಯ ಶೋಭನಕಾಯ
ಆ ಮಹಾಜ್ಞಾನದಾತ ಅನುಮಾನತೀರಥ
ಕೋಮಲಮತಿಧಾರ್ಯ ವೈಷ್ಣವಾರ್ಯ
ಕಾಮ ಸುತ್ರಾಮ ಶರ್ವ ಸುರನುತ ಗುರುಸಾರ್ವ-
ಭೌಮಾತಿಭಯನಾಶ ಭಾರತೀಶ
ರಾಮ-ಕೃಷ್ಣ-ವ್ಯಾಸ ವಿಜಯವಿಠಲನ ಹೃದಯ-
ದಾಮದೊಳಗಿಟ್ಟ ಸತತ ದಿಟ್ಟ

ಮಟ್ಟತಾಳ

ಹರಿಯು ಗುಣಶೂನ್ಯ ಹರಿಯು ನಿರಾಕಾರ
ಹರಿಯು ದೊರೆಯು ಅಲ್ಲ ಹರಿ ಪರತಂತ್ರ
ಹರಿಯು ದುರ್ಬಲನು ಹರಿಗೆ ಎಂಟುಗುಣ
ಹರಿಯು ತಾನೆಂದು, ತಾರತಮ್ಯವೆನದೆ
ಧರೆಯೆಲ್ಲ ಮಿಥ್ಯಾ ,ಪರಿಪರಿ ಕರ್ಮಗಳು
ಹರಿತಾನೆ ಪುಟ್ಟಿ ಚರಿಸುವ ಲೀಲೆಯಲಿ
ನರ ನಾನಾ ಜನ್ಮ ಧರಿಸಿ ತೋರುವೆನೆಂದು
ದುರುಳ ದುರ್ಮತದವರು ಸರಿಸರಿ ಬಂದಂತೆ
ವರಲಿ ಸಜ್ಜನರನ್ನು ತಿರಸ್ಕಾರವನೆ ಮಾಡಿ
ತಿರುಗುತಿರೆ , ಇತ್ತ ಸುರರು ಕಳವಳಿಸಿ
ಪರಮೇಷ್ಠಿಗೆ ಪೇಳೆ ಹರಿಗೆ ಬಿನ್ನೈಸಲು
ಮರುತದೇವನೆ ಆವತರಿಸಿದ ಹರುಷದಲಿ
ಕರುಣಾಕರಮೂರ್ತಿ ವಿಜಯವಿಠಲರೇಯ
ಪರನೆಂದು ಸಾರಿ ಧರೆಯೊಳಗೆ ಮೆರೆದ

ತ್ರಿವಿಡಿತಾಳ

ಶೂನ್ಯವಾದಿ ಮಿಕ್ಕ ದುರ್ಮತದವರೆಲ್ಲ
ಸನ್ಯಾಯವಿಲ್ಲದ ವಚನದಿಂದ
ಸನ್ಯಾಸಿಗಳೆಂಬೊ ಗರ್ವವಲ್ಲದೆ ವೇದ-
ಸನ್ಮತವಾಗದ ದುರ್ಲಕ್ಷಣ-
ವನ್ನೆ ಕಲ್ಪಿಸಿ , ಶುದ್ಧ ಆಚಾರವನೆ ಕೆಡಿಸಿ
ಭಿನ್ನವಿಲ್ಲವೆಂದು ತಿರುಗುತಿರೆ
ಪುಣ್ಯಶ್ಲೋಕ ನಮ್ಮ ವಿಜಯವಿಠಲನ
ಸನ್ನುತಿಸದೆ ದ್ವೇಷವತಾಳಿರೆ

ಅಟ್ಟತಾಳ

ಇಪ್ಪತ್ತುವೊಂದು ಕುಭಾಷ್ಯವ ರಚಿಸಿರೆ
ಒಪ್ಪದಿಂದಲಿ ಗೆದ್ದು ಅವರವರ ಮಹಾ-
ದರ್ಪವ ತಗ್ಗಿಸಿ , ದಶದಿಕ್ಕುಪಗಿಸಿ, ಕಂ-
ದರ್ಪ ಜನಕನು ಸ್ವತಂತ್ರ ಗುಣಪೂರ್ಣ
ಅಪ್ಪಾರಮಹಿಮ ಸಾಕಾರ ಸತ್ಪುರುಷ
ತಪ್ಪದೆ ತ್ರಿಲೋಕ್ಕಕ್ಕೊಡೆಯ ಜಗಜ್ಜೀವ-
ನಪ್ಪನು ಸರ್ವಾಂತರಂಗದೊಳಗೆ ಬಿಡ-
ದಿಪ್ಪ ವಿಶ್ವ ಮೂರುತಿ ವಿಲಕ್ಷಣ ರೂಪ
ಸರ್ಪಶಯನ ನಮ್ಮ ವಿಜಯವಿಠಲರೇಯ
ಮುಪ್ಪಿಲ್ಲದ ದೈವ ಅಜ-ಭವಸುರವಂದ್ಯ

ಆದಿತಾಳ

ದರುಶನಗ್ರಂಥವ ರಚಿಸಿ ಸುಜನರ ಪಾಲಿಸಿ
ಮರುತ ಮತದ ಬಿರಿದೆತ್ತಿದೆ ಮಹಾಯತಿ
ಸರಿಗಾಣೆ ನಿಮಗೆಲ್ಲಿ ವರ್ಣಿಸಲೆನ್ನಳವೆ
ದುರುಳರ ಗಂಟಲಗಾಣ ವಿದ್ಯಾಪ್ರವೀಣ
ನೆರೆನಂಬಿದವರಿಗೆಲ್ಲ ಮನೋವ್ಯಥೆಗಳಬಿಡಿಸಿ
ವರ ಸುಭಕುತಿ ಜ್ಞಾನ ವಿರಕ್ತಿ ಮಾರ್ಗವ ತೋರಿಸಿ
ಪೊರೆವ ತತ್ವದವನಧಿ ಪೊಡವಿಯೊಳಗೆ
ಸುರನರೋರಗಾದಿಗೆ ಗುರುವೆ ಪರಮಗುರುವೆ
ಸರಸ ಸದ್ಗುಣಸಾಂದ್ರ ವಿಜಯವಿಠಲರೇಯನ
ಚರಣವ ನಂಬಿದ ಪ್ರಧಾನ ವಾಯುದೇವ

ಜತೆ

ಅದ್ವೈತಮತಾರಣ್ಯದಾವ , ವ್ಯಾಸಶಿಷ್ಯ
ಮಧ್ವಮುನಿ ವಿಜಯವಿಠಲನ ನಿಜದಾಸ

https://drive.google.com/file/d/1b9oQ6d2zS2lidlhgA1Pdia9CpLzo5fk2/view?usp=drivesdk

Leave a Reply

Your email address will not be published. Required fields are marked *